Sunday 30 September 2012

ಭಂ ಬೋಲೆ ೨


ಭೆತ್ತೆಯೆಂಬ ಹಲವು ರಾತ್ರಿಗಳ ಮೊದಲ ರಾತ್ರಿ



ಊರಲ್ಲಿ ವಿದ್ಯುತ್ ಇಲ್ಲಯಾವುದೇ ಸರ್ಕಾರಿ ಸವಲತ್ತುಗಳಿಲ್ಲಸರ್ಕಾರಿ ಸಂಸ್ಥೆಗಳೂ ಇಲ್ಲಹೆಸರಿಗಷ್ಟೇ ಅದೊಂದು ಊರು. ಪ್ರಮುಖ ವಾಹಿನಿಯ ಯಾವ ಲಕ್ಷಣಗಳೂ ಇಲ್ಲದ ಅಸಂಬದ್ಧ ಸಮುದಾಯ ಅದು. ಅಲ್ಲಿಯವರ ಜೀವನ ಶೈಲಿಅವರ ಸಂಪ್ರದಾಯಗಳು ಎಲ್ಲವೂ ಕಾಡು ಜನಾಂಗದ ಬದುಕಿನಿಂದ ಪ್ರೇರಣೆ ಪಡೆದವೇನೋ ಎನಿಸುವಷ್ಟು ವಿಚಿತ್ರ. ಸಮಾಜದ ಬಹುಮುಖ್ಯ ಆದರ್ಶವಾಗಿರುವ ಮದುವೆಯೆಂಬ ಪದ್ಧತಿ ಅವರಲ್ಲಿಲ್ಲ. ಹಾಗಂತ ಅಲ್ಲಿ ಹೆಣ್ಣು ಗಂಡುಗಳಿಲ್ಲವೆಂದಲ್ಲಅಲ್ಲಿ ಮಕ್ಕಳು ಜನಿಸುವುದಿಲ್ಲವೆಂದಲ್ಲ. ಅಲ್ಲಿ ಮದುವೆ ಎಂಬುದು ಮಾತ್ರ ಇಲ್ಲ. ಸಮಾಜದ ಎಲ್ಲ ಸೌಲಭ್ಯಗಳಿಂದ ಹೊರತಾದ ಊರಲ್ಲಿನ್ಯಾಯ ಹೇಳಲು ಒಬ್ಬ ನಾಯಕನಿದ್ದಾನೆ,ಅವನ ನಂತರದಲ್ಲಿ ಅವನೇ ಗುರುತಿಸುವ ಮತ್ತೊಬ್ಬನು ಗುಂಪಿಗೆ ನಾಯಕನಾಗುತ್ತಾನೆ.ಹಾಗೆ ಅವನು ಗುರುತಿಸಿದವನ ಹೊರತು ಮತ್ತಾರು ಸ್ಥಾನವನ್ನ ನಿಭಾಯಿಸುವಂತಿಲ್ಲ. ಹೆಣ್ಣುಮಗು ಹರೆಯಕ್ಕೆ ಬಂದರೆಮೊದಲು ಅವಳು ನಯಕನನ್ನೇ ವರಿಸಬೇಕು. ಸಮುದಾಯದಲ್ಲಿ ಮತ್ತೊಬ್ಬಳು ಹೆಣ್ಣುಮಗಳು ವಯಸ್ಸಿಗೆ ಬರುವವರೆಗೂ ಇವಳೇ ಅವನ ಹೆಂಡತಿಯಾಗಿರುತ್ತಾಳೆ. ಅವನ ಜೊತೆಯಲ್ಲಿ ಜೀವನ ಮುಗಿದಮೇಲೆ ಅವಳು ಸ್ವತಂತ್ರಳು. ಸ್ವತಂತ್ರಳಾದಮೇಲೆ ಮತ್ತೆ ಅವಳು ನಾಯಕನನ್ನ ಎಂದಿಗೂ ಕೂಡುವಂತಿಲ್ಲ. ಅದು ಅಲ್ಲಿಯ ಅಲಿಖಿತ ನಿಯಮ. ಕಾಮ ಅಲ್ಲಿಯ ಅವಶ್ಯಕತೆಯಷ್ಟೆ. ಸ್ವತಂತ್ರಳಾದ ಹೆಣ್ಣುಮಗಳು ಯಾರೊಂದಿಗೂ ಇರಬಹುದು. ಏಕೆಂದರೆ ಅಲ್ಲಿ ಮನೆಯೆಂಬ ಚೌಕಟ್ಟೂ ಇಲ್ಲ. ಇಡೀ ಸಮುದಾಯವೇ ಒಂದು ಮನೆ. ವಾಸಿಸಲು ಅನುಕೂಲವಾಗುವಂತೆ ಕೆಲವು ಸೂರುಗಳನ್ನ ಅಲ್ಲಿ ನಿರ್ಮಿಸಿಕೊಂಡಿದ್ದಾರೆಯೇ ವಿನಹ ಅದು ಯಾವುದೂ, ಯಾರ ಮನೆಯೂ ಅಲ್ಲ.

ಅಂತಹ ಊರಲ್ಲಿ ಅಂದು ಸಂಭ್ರಮ ಶುರುವಾಗಿತ್ತು. ಅಂದು ಅಲ್ಲಿ ಭೆತ್ತೆಯ ದಿನ. ಹರೆಯಕ್ಕೆ ಬಂದ ಹುಡುಗಿ ನಾಯಕನನ್ನ ಸೇರುವ ಕಾರ್ಯಕ್ರಮಕ್ಕೆ ಭೆತ್ತೆ ಎಂದು ಹೆಸರು. ಊರಲ್ಲಿ ಅಂದು ಸುಮೇರಿ ವಯಸ್ಸಿಗೆ ಬಂದಳು ಎಂಬುದು ಗೊತ್ತಾಗಿತ್ತುಅಲ್ಲಿಯವರೆಗೆ ಮುಖ್ಯಸ್ಥನಾದ ಅರವತ್ತೆರಡರ ಹರೆಯದ "ಗೀರ" ಹೆಂಡತಿಯಾಗಿದ್ದವಾಡಿಕೆಯಲ್ಲಿ ಸುಮೆರಿಯ ದೊಡ್ಡಮ್ಮನ ಮಗಳಾದ "ಗೋಪಿಕೆಗೆ ಸ್ವಾತಂತ್ರ್ಯದ ದಿನಗೋಪಿಕೆಗೆ ಇಪ್ಪೊತ್ತೊಂದರ ಹರೆಯಸುಮೇರಿ ಹದಿನಾರಕ್ಕೆ ಕಾಲಿಟ್ಟಿದ್ದಳು.
 ಅಂದು ಭೆತ್ತೆಗೆ ಅಲ್ಲಿ ಸಕಲ ಸಿದ್ಧತೆ ನಡೆದಿತ್ತುಬೆಳಗಿನಿಂದ ಅಲ್ಲಿ ಎಲ್ಲರಿಗೂ ಭೆತ್ತೆಯದೇ ಸಡಗರಊರಿನ ಯುವಕರು ಅಂದು ಬೇಟೆಗೆ ಹೋಗಿದ್ದರುಬೇಟೆಯೆಂದರೆ ಅವರು ಹೇಗಾದರೂ ಮಾಡಿ ಗರ್ಭಿಣಿ ಜಿಂಕೆಯನ್ನ ಬೇಟೆಯಾಡಬೇಕುಭೆತ್ತೆ ಹತ್ತಿರಬರುತ್ತಿದ್ದಂತೆಯೇ ಕಾಡಿನಲ್ಲಿ ಓಡಾಡಿ ಅಂತಹದೊಂದು ಜಿಂಕೆಯನ್ನ ಹುಡುಕಿ ಅದರಮೇಲೆ ನಿರಂತರವಾಗಿ ನಿಗಾ ಇಟ್ಟಿರುತ್ತಾರೆಭೆತ್ತೆಯ ದಿನದಂದು ಅದನ್ನ ಜೀವಂತವಾಗಿ ಹಿಡಿದು ಯುದ್ಧ ಗೆದ್ದ ಸಂಭ್ರಮದಲ್ಲಿ  ಜಿಂಕೆಯನ್ನ ಹೊತ್ತು ತರುವುದು ಅಲ್ಲಿಯ ಹುಡುಗರಿಗೆ ಪರಮಾದ್ಭುತದ ವಿಷಯಹಾಗೆ ನಿಗಾವಹಿಸಿದ ಜಿಂಕೆಯನ್ನ ಹಿಡಿಯಲು ತುಂಡು ಯುವಕರ ಗುಂಪೊಂದು ಕಾಡಿಗೆ ಹೋಗಿತ್ತುಊರಿನ ಸ್ವತಂತ್ರ ಹೆಂಗಸರೆಲ್ಲಸಹಚಾರಿಣಿಯಾಗಲಿರುವ ಹೆಣ್ಣುಮಗಳ ಜಳಕದ ಕಾರ್ಯಕ್ರಮಕ್ಕೆ ತಯಾರಿ ಶುರುಮಾಡಿದ್ದರು. ಸುಮೇರಿ ಅಲ್ಲಿ ಎಲ್ಲರ ನೆಚ್ಚಿನ ಹುಡುಗಿ. ಅವಳು ಬಾಲ್ಯದಿಂದಲೂ ತನ್ನದೇ ಆದ ಶೈಲಿಯಲ್ಲಿ ಬೆಳೆದವಳು. ಯಾವ ಬೇಲಿಯಿಲ್ಲದಂತೆ, ನಿರ್ಭೀಡೆಯಿಂದ ಚೆಲ್ಲು ಚೆಲ್ಲಾಗಿ ವಿಹರಿಸಿದವಳು. ಒಂದು ಕಡೆಯಲ್ಲಿ ಭೆತ್ತೆಗೆ ಸಿದ್ಧತೆ ನದೆಯುತ್ತಿದ್ದರೆ ಅವಳು ಊರಿನಿಂದ ಸ್ವಲ್ಪ ದೂರದಲ್ಲಿಯೇ ಇದ್ದ ತೊರೆಯ ಬಳಿ ಹೋಗಿದ್ದಳು. ಅದು ಅವಳ ಬಹಳ ಇಷ್ಟದ ಜಾಗ. ಅಲ್ಲಿ ಸಾಮಾನ್ಯವಾಗಿ ಹೊತ್ತಿನಲ್ಲಿ ಯಾರೂ ಇರುವುದಿಲ್ಲ. ಏಕಾಂತವೇ ಅವಳಿಗೆ ಹಿಡಿಸಿದ್ದು.

ತೊರೆಯ ತಟದಲ್ಲಿಕಟ್ಟಿಗೆಯಲ್ಲಿ ನಾಜೂಕಾಗಿ ಕೆತ್ತನೆ ಮಾಡಿದ ಗೆಜ್ಜೆಕಟ್ಟಿಕೊಂಡುಹರಿವ ನೀರೊಳಗೆ ಪಾದ ಮುಳುಗುವಷ್ಟು ಕಾಲನ್ನ ಇಳಿಬಿಟ್ಟುಕೈಯಲ್ಲಿ ಹದವಾಗಿ ಬೆಳೆದುಕೊಂಡಿದ್ದ ತಟದ ಹುಲ್ಲನ್ನ ಗೀರುತ್ತಹಗಲುಗನಸಲ್ಲಿ ಹುಸಿನಗುತ್ತಅವಳು ಮೈ ಮರೆತಿದ್ದಳುಇಳಿಸಂಜೆಯ ತೀಳಿಬೆಳಕಲ್ಲಿಅವಳ ಮೂಗುತಿಯ ಹವಳಮತ್ತೊಂದು ಸೂರ್ಯನಂತೆ ಮಿನುಗುತ್ತಿತ್ತುಬಾನು ಕೆಂಪೇರುವ ಮೊದಲಿನ ಅರೆಹಳದಿ ಬಣ್ಣದಲ್ಲಿ ತುಂಬಿದ ಕೆನ್ನೆಗಳು ಜೇನುಸುರಿವ ಪಿಂಗಾಣಿ ಬಟ್ಟಲಂತೆ ಹೊಳೆಯುತ್ತಿದ್ದರೆ ಕೆನ್ನೆಗಳನ್ನ ಕಿವಿಯಲ್ಲಿ ತೂಗುಬಿಟ್ಟಿದ್ದ ಚಚ್ಚೌಕದ ಕಟ್ಟಿಗೆಯ ಓಲೆ ಗಾಳಿಗೆ ಬಾಗಿ ಬಾಗಿ ಮುತ್ತಿಡುತ್ತಿತ್ತುವಯಸಿಗೆ ಬಂದ ಅವಳ ಮೈಯನ್ನ ಕೆಂಪು ಕುಪ್ಪುಸ ಮುಚ್ಚಿತ್ತುಮೊಣಕಾಲವರೆಗೆ ಹಸಿರು ಲಂಗ ಪಕ್ಕದ ಹುಲ್ಲುಹಾಸನ್ನೂ ಮೀರುವಷ್ಟು ಸುಂದರವೆನಿಸಿದರೂ ಅದರ ಕೆಳಗಿನ ಅವಳ ಹಾಲುಬಣ್ಣದ ನೀಳ ಕಾಲುಗಳೇ ಕಣ್ಸೆಳೆಯುತ್ತಿದ್ದವುಮುಂಗುರುಳ ಕಳ್ಳಾಟಕ್ಕೆಅದರದ ಅದುರುವಿಕೆಗೆನಗುವಲ್ಲಿ ಸುಮ್ಮನೆ ಹಿಗ್ಗಿಕುಗ್ಗುವ ಗಲ್ಲದ ಚಟುವಟಿಕೆಗೆ ಅಲ್ಲಿ ಕೊನೆಯಿರಲಿಲ್ಲಅವಳ ಪಾದವನ್ನ ಸಾದ್ಯಂತವಾಗಿ ಸವರಿ ಸಾಗುತ್ತಿದ್ದ ತೊರೆತುಸುದೂರದಲ್ಲೇ ಇಳಿಜಾರ ತಿರುವಲ್ಲಿ ತಿರುಗುವ ರಭಸಕ್ಕೆ ಮಂಜಿನ ಮಬ್ಬನ್ನ ಸೃಷ್ಟಿಸಿತ್ತು.
ವಯೋ ವ್ರದ್ಧನೊಬ್ಬ ಕುದುರೆಯನ್ನೇರಿ ತೊರೆ ತಟದಲ್ಲಿಯೇ ಬರುತ್ತಿದ್ದುದು, ಅವಳನ್ನ ಕಲ್ಪನಾಲೋಕದಿಂದ ವಾಸ್ತವಕ್ಕೆ ತಂದಿತು. ಕುದುರೆ ಸ್ವಲ್ಪ ಹತ್ತಿರವಾಗುತ್ತಿದ್ದಂತೆಯೇ ಅದರ ಸವಾರ ಯಾರೆಂಬುದು ಅವಳಿಗೆ ಅರ್ಥವಾಗಿತ್ತು.
..............................................................................
ಸಾಯಂಕಾಲ ಕಳೆದು ರಾತ್ರಿ ಕಾಲಿಡುತ್ತಿತ್ತು. ಊರಿನದೇ ಆದ ನ್ರತ್ಯ ತಂಡವೊಂದು, ತಾಲೀಮು ಮುಗಿಸಿ, ಬಯಲು ಸಭೆಯ ಬಯಲಿನಲ್ಲಿ ನ್ರತ್ಯ ಆರಂಭಿಸಿತ್ತು. ಡೋಲು, ಬೊಂಬಿನ ವಾದ್ಯ, ಹಿತ್ತಾಳೆ ಪಾತ್ರೆಯ ಪಕ್ಕವಾದ್ಯಗಳ ಸಂಗೀತ ಸಂಜೆಯನ್ನ ಕಳೆಕಟ್ಟುತ್ತಿದ್ದವು. ಮಕ್ಕಳು ಎಲ್ಲೆಂದರಲ್ಲಿ ಓಡಾಡಿಕೊಂಡಿದ್ದವು. ಅಲ್ಲಿ ಎಲ್ಲರಿಗೂ ಹಬ್ಬದ ವಾತವರಣ. ಹಿರಿಯ-ಕಿರಿಯರೆಂಬ ಭೇದಭಾವವಿಲ್ಲದೆ ಎಲ್ಲರು ಆನಂದದಲ್ಲಿ ಸಡಗರದಲ್ಲಿ ಪಾಲ್ಗೊಂಡಿದ್ದರು. ಸೋಮರಸ ಸಿದ್ದವಾಗಿ ಗೀರನ ಅನುಮತಿಗೆ ಕಾಯುತ್ತಿತ್ತು. ಗೀರ ಎಂದಿನಂತೆ ತನ್ನ ಖುರ್ಚಿಯಲ್ಲಿ ಗಂಭೀರವಾಗಿ ಕುಳಿತಿದ್ದ.
ಸುಮೇರಿಗೆ ಮಾವಿನೆಲೆಯ ನೀರಲ್ಲಿ ಮೂರುಬಾರಿ ಸ್ನಾನ ಮಾಡಿಸಲಾಯಿತು. ಆಮೇಲೆ ಬೆಳದಿಂಗಳ ಸ್ನಾನವೂ ಆದಮೇಲೆ, ಪದ್ಧತಿಯಂತೆ ಕೆಂಪು ಸೀರೆ ಉಡಿಸಿದರು. ಗೀರನ ಮನೆಯ ಎದುರುಗಡೆಯಲ್ಲಿ ಊರಿನ ಆರಾಧ್ಯ ದೈವವಿದೆ. ಸುಮೆರಿಯನ್ನ ಅಲ್ಲಿಗೆ ಕರೆದುಕೊಂಡುಹೋಗಿ ಪೂಜೆಯನ್ನ ಮಾಡಿಸಿದರು. ಸುಮೇರಿ ಎಲ್ಲವನ್ನೂ ಯಾಂತ್ರಿಕವಾಗಿ ಮಾಡುತ್ತಿದ್ದಳು. ಎಲ್ಲವೂ ತನ್ನ ಬದುಕಲ್ಲಿ ನಡೆಯಲೇಬೇಕಾದ ಸಂಗತಿಯೇನೊ ಅಂದುಕೊಂಡು ಅವಳು ನಿರ್ವಹಿಸಿದಳು. ಅವಳಲ್ಲಿ ಕುತೂಹಲವೂ ಇರಲಿಲ್ಲ, ತಿರಸ್ಕಾರವೂ ಇರಲಿಲ್ಲ. ಆಳು ಎಷ್ಟೇ ನಿರ್ಭಾವುಕಳಾಗಿದ್ದರೂ ಅವಳ ಸಹಜ ಸೌಂದರ್ಯ ಕೆನ್ನೆಗೆ ಲೆಪಿಸಿದ ಅರಿಶಿನದಿಂದಾಗಿ ಅವಳು ಉತ್ಸಿತಳೇ ಎಂಬಂತೆ ಕಾಣುತ್ತಿತ್ತು. ದೇವರಿಗೆ ಪೂಜೆಯಾದಮೇಲೆ ಬಲಿಯಾಗಬೇಕು. ಬಲಿಯೇ ಗರ್ಭಿಣಿ ಜಿಂಕೆ. ಎಲ್ಲರೆದುರಲ್ಲಿ ಬಲಿಯೂ ಅನಾಯಾಸವಾಗಿ ನಡೆದುಹೋಯಿತು. ಅಲ್ಲಿಂದ ಸುಮೇರಿಯನ್ನ ಸಭೆಗೆ ಕರೆತಂದರು. ಗೀರ, ರಾಜಗಾಂಭೀರ್ಯದಲ್ಲಿ ಅವಳ ಆಗಮನವನ್ನೇ ಎದುರುನೋಡುತ್ತಿದ್ದ. ಅವನಿಗೆ ಹಲವು ಭೆತ್ತೆಗಳು ಆಗಿದ್ದರೂ ಸುಮೇರಿ ಊರಿನ ಅಪರೂಪದ ಚೆಲುವೆ. ಬರಿಯ ಚೆಲುವೊಂದೇ ಆಗಿದ್ದರೆ, ಅವಳೂ ಸಾಮನ್ಯ ಹೆಣ್ಣುಮಗಳಾಗಿರುತ್ತಿದ್ದಳು. ಸುಮೇರಿ ಬುದ್ಧಿವಂತೆಯೂ ಹೌದು. ವಿರಳವೆಂಬಂತೆ ಅವಳಿಗೆ ಭೇಟೆಯಾಡುವ ಕಲೆಯೂ ಸಿದ್ಧಿಸಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಅವಳ ಆರನೇಯ ಇಂದ್ರಿಯ ಕೆಲಸಮಾಡುತ್ತಿತ್ತು.ಅವಎದ್ದುಳು ವೇದಿಕೆಯನ್ನ ಪ್ರವೇಶಿಸುತ್ತಿದ್ದಂತೆಯೇ ಸಭಿಕರೆಲ್ಲರ ಗಮನ ವೇದಿಕೆಯತ್ತ ನೆಟ್ತಿತು. ಗೀರನಿಗೆ ಅರವತ್ತು ದಾಟಿದ್ದರೂ ಅವನ ಶರೀರ ಕುಂದಿರಲಿಲ್ಲ. ಮಾಂಸಲಗಳು ಇಳಿಬಿದ್ದಿರಲಿಲ್ಲ. ಕಾಮ ಕಡಿಮೆಯಾಗಿರಲಿಲ್ಲ. ಸರಿಯಾಗಿ ಆರು ಅಡಿಯ ಅಜಾನಬಾಹು ಆತ. ಸುಮೇರಿಯನ್ನ ನೋಡಿದವನೇ ಎದ್ದುಬಂದು ತನ್ನ ಕೊರಳಲ್ಲಿದ್ದ ಕಟ್ತಿಗೆ ಸರವನ್ನ ಅವಳ ಕೈಗಳನ್ನ ತನ್ನತ್ತ ಸೆಳೆದು ಅದರಲ್ಲಿತ್ತ. ಸ್ಪರ್ಶದಲ್ಲಿಯೇ ಸುಮೇರಿಗೆ ಕಾಮದ ವಾಸನೆ ಬಡಿದಿತ್ತು. ಜೊತೆಯಲ್ಲಿ, ಇದೇ ಕೈಗಳು ಖಡ್ಗ ಹಿಡಿದಂತೆಯೂ ಅವಳಿಗನಿಸಿತು. ಅಷ್ಟೊತ್ತಿಗಾಗಲೆ ಗೀರ ಅವಳ ತಲೆಸವರಿದನಾದ್ದರಿಂದ ಹಾಗೆ ಬಂದ ಆಲೋಚನೆಯಿಂದ ಅವಳು ಹೊರಬಂದಳು.

ಅವಳ ಹಣೆಗೆ ಗರ್ಭಿಣಿ ಜಿಂಕೆಯ ರಕ್ತದ ತಿಲಕವನ್ನಿಟ್ಟು, ಅವಳನ್ನ ಅಲ್ಲಿಯವರೆಗೆ ಕರೆತಂದಿದ್ದ ಹೆಂಗಸರಿಗೆ ಸನ್ನೆಮಾಡಿದ. ಅವನ ಸನ್ನೆಯನ್ನರಿತ ಅವರು ಸಭೆಯನ್ನ ಸೇರಿಕೊಂಡರು. ಎಲ್ಲರಿಗೂ ಭರ್ಜರಿ ಮಾಂಸದ ಊಟ ಸಿದ್ಧವಿತ್ತು. ಗೀರ ಕಾರ್ಯಕ್ರಮದ ಕೊನೆಯಭಾಗವಾದ ಸೋಮರಸ ಸೇವನೆಗೆ ಚಾಲನೆ ನೀಡಿದ. ಎಲ್ಲರೂ ಅದಕ್ಕಾಗಿಯೇ ಕಾದಿದ್ದರೇನೊ ಎನುವಂತೆ ಮುಗಿಬಿದ್ದು ಸೋಮರಸದಾಸರಾದರು. ಮಂಜ ಗೌರಿಯನ್ನ ಕರೆದ, ಲಾವಣಿ ಗುಲ್ಯನಿಗೆ ಸನ್ನೆಮಾಡಿದಳು. ಬಿಡ್ತ ರಾಧೆಯ ಕೈ ಸವರಿದ ಹೀಗೆ ಜೋಡಿಗಳು ಉನ್ಮತ್ತರಾದವು. ಪದ್ಧತಿಯಂತೆ ಗೋಪಿಕೆ ಸುಮೇರಿಯನ್ನ ಗೀರನ ಕೋಣೆಗೆ ಕಳುಹಿಸಿ, ತನ್ನ ಸ್ವಾತಂತ್ರ್ಯಕ್ಕಾಗೇ ಕಾಯುತ್ತಿದ್ದ ಗಜೇಂದ್ರನನ್ನು ಸೇರಿದಳು.
ಸೋಗಿಯಿಂದ ಮಾಡಿದ ಕೋಣೆಯ ಮಧ್ಯದಲ್ಲಿ ಐದು ಅಡಿ ಎತ್ತರದ ಕಂಬದಮೇಲೆ ದೀಪವನ್ನಿರಿಸಲಾಗಿತ್ತು. ಹಳದಿ ಬಟ್ಟೆಯಿಂದ ಸಿಂಗರಿಸಿದ್ದ ಮಂಚದ ಕೆಳಗೆ ಒಂದು ಕಾಲನ್ನ ಇಳಿಬಿಟ್ಟು, ಮತ್ತೊಂದು ಕಾಲನ್ನ ಮಡಚಿ ಕುಳಿತಿದ್ದ ಸುಮೇರಿಗೆ ಗೋಪಿಕೆ ಹೇಳಿದ ಗೀರನೊಂದಿಗಿನ ಮೊದಲ ಅನುಭವ ನೆನಪಾಯಿತು. ಅಪರಿಚಿತ ಸಂದರ್ಭವನ್ನ ಹೇಗೆ ಎದುರಿಸುವುದೆಂಬ ಅಳುಕು ಅವಳಲ್ಲಿತ್ತು. ಗೋಪಿಕೆಯ ನೋವು, ಗೀರನಲ್ಲಿಯ ಮೃಗೀಯ ಧಾಳಿ,ಎಲ್ಲ ಒಮ್ಮೆಗೆ ನೆನಪಾಗಿ ಸುಮೇರಿ ಕ್ಷಣಮಾತ್ರಕ್ಕೆ ನಲುಗಿದಳು. ಹುಟ್ಟು ಧೈರ್ಯವಂತೆಯಾಗಿದ್ದ ಅವಳನ್ನ ಭಯ ಹೆಚ್ಚುಹೊತ್ತು ಕಾಡಲಿಲ್ಲ. ಮಂಚದ ಎಡಗಡೆಯಲ್ಲಿ ಒಂದು ಬಟ್ಟಲಲ್ಲಿ ಎಣ್ಣೆ ಹಾಗೂ ಮತ್ತೊಂದು ಬಟ್ಟಲಲ್ಲಿ ಸುವಾಸನೆಭರಿತ ಹೂಗಳಿಂದ ಮಾಡಿದ ದ್ರವವನ್ನ ಇರಿಸಲಾಗಿತ್ತು. ಸುಮೇರಿ ಎಲ್ಲವನ್ನೂ ನಾಜೂಕಾಗಿ ಗಮನಿಸಿದಳು. ಕೋಣೆಯ ಎದುರುಬದಿಯ ಗೋಡೆಯಮೇಲಿನ ಕೋಣದಮುಖದ ಎಲುಬನ್ನ ನೋಡಿದಳು. ಅದು ಗೀರನ ಅಭಿರುಚಿಯನ್ನ ತೋರಿಸುವಂತಿತ್ತು. ಮುಖದ ಕೆಳಗಡೆಯಿದ್ದ ಬಾಗಿಲಿನಿಂದ ಗೀರ ಒಳಗೆ ಬಂದ. ಸುಮೇರಿ ಎಚ್ಚೆತ್ತಳು.
ಮಂಚದಮೇಲೆ ಎಂದೂ ನೋಡದ ಸುಂದರಿಯೊಬ್ಬಳನ್ನ ಅವನು ನೋಡುತ್ತಿದ್ದ. ಅಕ್ಷರಶಃ ಅವಳು ಅಂತಹದೆ ಸುಂದರಿ. ಮಂದ ಬೆಳಕು, ಸಿದ್ಧವಾದ ಹಾಸಿಗೆ, ಅದರಮೇಲೆ ಸುಮೇರಿ ಎಲ್ಲವು ಅವನೇ ತದಮಾಡಿದನೆಂದು ಅಣುಕಿಸಿದಂತೆ ಅವನಿಗನಿಸಿತು. "ನಿನ್ನ ಬಗ್ಗೆ ಕೇಳಿದ್ದೆ, ನಿನ್ನನ್ನ ಅಗಾಗ ಗುಟ್ಟಾಗಿ ಗಮನಿಸಿಯೂ ಇದ್ದೆ. ನಿನ್ನ್ ಸ್ವಭಾವದ ಪರಿಚಯವೂ ನನಗಿದೆ. ಆದರೆ ಇಷ್ಟು ಹತ್ತಿರದಲ್ಲಿ, ನನ್ನವಳನ್ನಾಗಿಯೇ ನಿನ್ನನ್ನ ನೋಡುತ್ತಿರುವುದು ನನ್ನಲ್ಲಿ ಹೊಸ ಯವ್ವನ ತಂದಂತೆ ಆಗಿದೆ" ಎನ್ನುತ್ತ ಮಂಚದಮೇಲೆ ಅವಳ ಪಕ್ಕದಲ್ಲಿಯೇ ಬಂದು ಕುಳಿತ. ಅವಳು ಸುಮ್ಮನೆ ಅವನತ್ತ ತಿರುಗಿದಳು.
"ಎಂಥ ಸುಂದರಿ ನೀನು, ಹದಿನೇಳು ಭೆತ್ತೆ ನೋಡಿದ್ದೇನೆ ನಾನು. ಆದರೆ ನಿನ್ನನ್ನ ಸೇರದೆಯೇ ನಾನು ಸತ್ತುಹೋಗಿದ್ದರೆ, ನಾನು ಬದುಕಿದ್ದು ವ್ಯರ್ಥವಾಗುತ್ತಿತ್ತು. ನನ್ನ ಸಾವಿಗೆ ಮೊದಲೆ ನಿನಗೆ ಹರೆಯ ತಂದ ದೇವರಿಗೆ ನನ್ನ ಅನಂತಾನಂತ ಪ್ರಣಾಮಗಳು" ಎನ್ನುತ್ತ ತನ್ನೆರಡೂ ಕೈಗಳಿಂದ ಅವಳ ಭುಜವನ್ನ ಅದುಮಿದ.
"ನನ್ನಲ್ಲಿ ಪ್ರಶೆಗಳಿವೆ" ಮಾತಿನಲ್ಲಿಯೇ ತಾಳು ಎಂದಿದ್ದಳು.
ಅವನ ಜೀವಿತಾವದಿಯಲ್ಲಿ ಯಾರೂ ಅವನನ್ನ ಅನುಮಾನದಲ್ಲಿ ಪ್ರಶ್ನಿಸಿರಲಿಲ್ಲ. ಅದರಲ್ಲಿಯೂ ಭೆತ್ತೆಯ ದಿನ ಅವನ ಮಾತಿನ ಹೊರತಾಗಿ ಮತ್ತೊಂದು ಮಾತನ್ನೂ ಅವನು ಕೇಳಿರಲಿಲ್ಲ. ಅವಳ ನೇರ ಸ್ವಭಾವದ ಬಗ್ಗೆ ಕೇಳಿದ್ದರೂ ತನ್ನನ್ನ ಪ್ರಶ್ನಿಸಲಾರಳೆಂದೇ ಅವನು ಎಣಿಸಿದ್ದು. "ಸರಿ ಕೇಳು ಆದರೆ ಹೆಚ್ಚು ಸಮಯವಿಲ್ಲ" ಎಂದವನ ಧ್ವನಿಯಲ್ಲಿ ಅಸಹನೆಯಿತ್ತು.
"ಒಂದೇ ಪ್ರಶ್ನೆಯಲ್ಲಿ ಮುಗಿಸುತ್ತೇನೆ. ನಿಮಗೆ ಮತ್ತು ಊರಿಗೆ ಭೆತ್ತೆಯ ಅವಶ್ಯಕತೆ ಇದೆಯೆ?" ಎಂದಳು. ಅವಳಿಂದ ಪ್ರಶ್ನೆಯನ್ನ ಅವನು ಊಹಿಸಿರಲಿಲ್ಲ. ಅವಳು ಕೇಳಿದ ಪ್ರಶ್ನೆ ಮುಂದೊಂದು ದಿನ ಇದೇ ಊರಲ್ಲಿ ಕ್ರಾಂತಿಮಾಡಲೂಬಹುದೆಂದು ಒಮ್ಮೆಗೇ ಅವನಿಗನಿಸಿತು. ತನ್ನ ಸಾರ್ವಭೌಮತ್ವಕ್ಕೆ ಇದು ಧಕ್ಕೆ ತಂದರೂ ತರಬಹುದೆಂಬ ಆಲೋಚನೆ ಅವನಲ್ಲಿ ಮಿಂಚಿತು. ಆದರೂ ಸುಧಾರಿಸಿಕೊಂಡು ಹೇಳಿದ "ಇದು ಯಾರ ವಶ್ಯಕತೆಯಲ್ಲ, ನನ್ನ ಚಪಲವೂ ಅಲ್ಲ, ಹಿರಿಯರು ಮುಂದಾಲೋಚನೆಯಿಂದ ಮಾಡಿದ ಒಂದು ಒಳ್ಳೆಯ ಕಟ್ಟಳೆಯಷ್ಟೇ. ಊರಲ್ಲೇ ಜಗಳ, ಗಲಭೆ, ವೈಮನಸ್ಸು, ಹಗೆ ಹೀಗೆ ನಮ್ಮೊಳಗೇ ವೈರಿಗಳು ಹುಟ್ಟಬಾರದೆಂಬ ಕಾರಣಕ್ಕೆ ಹೀಗೊಂದು ಸಂಪ್ರದಾಯ ಮಾಡಿದ್ದಾರೆ. ವಯಸ್ಸಿನಲ್ಲಿ, ಅನುಮಾನ, ಸಂದೇಹ ಸಹಜ. ಬಲಿಯದ ಬುದ್ಧಿ ಬಲವಂತವಾಗಿ ಕ್ರಾಂತಿಯನ್ನ ಬಯಸುತ್ತದೆ. ಹಾಗಂತ ಕ್ರಾಂತಿಯೂ ಅದರ ಅವಶ್ಯಕತೆಯಾಗಿರುವುದಿಲ್ಲ. ಅಂತರಾಳ ಅರಿಯದೆ, ದೇವರೂ ಸುಳ್ಳೆಂದು ಹೇಳಬಹುದು. ಹಾಗಂತ ದೇವರು ಸುಳ್ಳೆ?" ವಿಷಯದ ಹರಿವನ್ನ ಬದಲಿಸಲು, ಸುತ್ತಿ ಬಳಸಿ ಅವಳಿಗೇ ಪ್ರಶ್ನೆಯಿಟ್ಟು ಸಮಾಧಾನ ಮಾಡಿಕೊಂಡ. ಅವನ ಮಾತಿನ ಶೈಲಿ, ಉದಾಹರಿಸಿದ ರೀತಿ, ಮತ್ತು ತಾನು ಸಣ್ಣವಳೆಂದು ಹೇಳಿದ ಅವನ ಮಾತಿಗೆ ಅವಳು ಮತ್ತೆ ಪ್ರಶ್ನೆ ಮಾಡದಂತಾದಳು. ಅವಳ ಮೌನವನ್ನರಿತ ಗೀರ "ಮತ್ತೇನಾದರೂ ಪ್ರಶ್ನೆಯಿದೆಯೇ" ಎಂದು ಕೇಳಿದ. ಅವಳ ಮೌನ ಮುಗಿದಿರಲಿಲ್ಲ. ದೇವರು ಸುಳ್ಳೇ ಎಂಬ ವಾಕ್ಯ ಅವಳನ್ನ ಕಾಡಿತು. ಅವನ ಕೈಗಳು ಅವಳ ಸೊಂಟವನ್ನ ಬಳಸಿ ಬಿಗಿದುಕೊಂಡಿತು. ಅವಳ ಕೊರಳಲ್ಲಿ ಅವನ ಬಿಸಿಯುಸಿರು ಹೊರಳಾಡಿತು. ತನ್ನ ಕಾಲ್ಬೆರಳಲ್ಲಿಯೇ ಅವಳ ಅಂಗಾಲ ಗೀರಿ, ಅವಳ ಹುಕ್ಕುಳನ್ನ ಮೀಟಿದ ಗೀರನ ಕಲೆಗೆ ಅವಳು ನಿರುತ್ತರಳಾದಳು. ಅಪ್ಯಾಯತೆಯಲ್ಲಿ ಅವಳನ್ನ ಆಲಿಂಗಿಸಿ ಅಂಗಾತವಾಗಿ ಮಲಗಿಸಿ ಅವಳ ಕೆನ್ನೆಯನ್ನ ನಾಲಗೆಯಲ್ಲಿ ತೀಡಿದ. ಅವಳ ಅದರಗಳು ಬರಿಯ ಕೆನ್ನೆಯನ್ನ ತಾಕಿದ್ದಕ್ಕೆ ಕೋಪಿಸಿಕೊಂಡಂತೆ ಅದುರಿದವು. ಅದರದ ಜೇನು ಅವನ ಪಾಲಾದವು. ಮುಂಗುರುಳ ಸರಿಸಿ ಕಿವಿಯನ್ನ ಕಚ್ಚಿದ. ಅವನ ಬೆನ್ನ ಹುರಿಯ ಮೇಲೆ ಅವಳ ಬೆರಳುಗಳು ಸರಾಗವಾಗಿ ಮಿಡಿದವು. ಅವಳ ಪಾದದಿಂದ ಮುತ್ತಿಡುತ್ತ, ಮೊಣಕಾಲು, ಕಿಪ್ಪೊಟ್ಟೆ, ಹುಕ್ಕುಳು ಹೊಟ್ಟೆ ದಾಟಿದನಂತರ ಗೀರನ ಕಣ್ಣು ಅವಳ ಎದೆಯಲ್ಲಿ ನಾಟಲು, ಸೆರಗು ಅವಳಿಂದ ಕದಲಲು, ಕಂಬದಮೇಲಿದ್ದ ಎಣ್ಣೆಯ ದೀಪ ಮುಂದಿನದೆಲ್ಲದಕ್ಕೂ ಸಾಕ್ಷಿಯಾಯಿತು.

No comments:

Post a Comment